: ಒಟಿಪಿ ಬೇಕಾಗೇ ಇಲ್ಲ, ಆದರೂ ನಿಮ್ಮ ಖಾತೆಗೆ ಬೀಳುತ್ತೆ ಕನ್ನ! ಒಟಿಪಿ ಇಲ್ಲದೇ ಖಾತೆಯಲ್ಲಿರುವ ಹಣವನ್ನು ಯಾರೂ ತೆಗೆಯುವುದಕ್ಕೆ ಸಾಧ್ಯವಿಲ್ಲ ಎಂದು ನೀವಂದುಕೊಂಡರೆ ಅದು ತಪ್ಪು. ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರು ಯಾವುದೇ ಒಟಿಪಿಯ ಸಹಾಯವಿಲ್ಲದೇ ಸಹ ಖಾತೆಗೆ ಕನ್ನ ಹಾಕಿ ಹಣ ಎಗರಿಸುತ್ತಿದ್ದಾರೆ. ತಂತ್ರಜ್ಞಾನ ಮುಂದುವರೆದಷ್ಟೂ ವಂಚಕರು ವಂಚಿಸುವುದಕ್ಕಾಗಿ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಒಟಿಪಿ ಇಲ್ಲದೇ ಖಾತೆಯಲ್ಲಿರುವ ಹಣವನ್ನು ಯಾರೂ ತೆಗೆಯುವುದಕ್ಕೆ ಸಾಧ್ಯವಿಲ್ಲ ಎಂದು ನೀವಂದುಕೊಂಡರೆ ಅದು ತಪ್ಪು. ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರು ಯಾವುದೇ ಒಟಿಪಿಯ ಸಹಾಯವಿಲ್ಲದೇ ಸಹ ಖಾತೆಗೆ ಕನ್ನ ಹಾಕಿ ಹಣ ಎಗರಿಸುತ್ತಿದ್ದಾರೆ.ಒಟಿಪಿ ಇಲ್ಲದೇ ಖಾತೆಗೆ ಕನ್ನ ಹಾಕುವ ಪ್ರಕ್ರಿಯೆ, ನಡೆಯುವುದು ಹೇಗೆ ಅಂದರೆ..; ನಿಮಗೆ ಬ್ಯಾಂಕ್ ಒಂದರಿಂದ ಫಾರ್ವರ್ಡ್ ಆಗಿರುವಂತೆ ಒಂದು ಮೆಸೇಜ್ ಬರುತ್ತದೆ. ಆ ಲಿಂಕ್ ನ್ನು ನೀವು ಒಮ್ಮೆ ಕ್ಲಿಕ್ ಮಾಡಿದರೆ ಸಾಕು ನಿಮ್ಮ ಒಟಿಪಿಯೇ ಇಲ್ಲದೇ, ಹಣ ಮಾಯವಾಗಿರುತ್ತದೆ. ಇದೇ ಮಾದರಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 40 ಲಕ್ಷ ರೂಪಾಯಿ ದೋಚಲಾಗಿದೆ.ಜನರನ್ನು ವಂಚಿಸಲು ಸೈಬರ್ ಅಪರಾಧಿಗಳು ಹೆಚ್ಚು ಅತ್ಯಾಧುನಿಕ ರಿಮೋಟ್ ಆಕ್ಸೆಸ್ ಟ್ರೋಜನ್‌ಗಳು () ಮತ್ತು ಆಂಡ್ರಾಯ್ಡ್ ಅಪ್ಲಿಕೇಶನ್ ಪ್ಯಾಕೇಜ್ () ಸಾಫ್ಟ್‌ವೇರ್ ಅನ್ನು ಸಹ ಬಳಸಿಕೊಳ್ಳುತ್ತಿದ್ದಾರೆ. ಗಳು ಮತ್ತು ಗಳು ಸಾಫ್ಟ್‌ವೇರ್ ಆಗಿದ್ದು, ಇವು ವ್ಯಕ್ತಿಯ ಸಾಧನವನ್ನು ಅವರ ಅರಿವಿಲ್ಲದೆ ದೂರದಿಂದಲೇ ನಿಯಂತ್ರಿಸಲು ಸೈಬರ್ ಅಪರಾಧಿಗಳಿಗೆ ಅನುವು ಮಾಡಿಕೊಡುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.ವಂಚಕರು ರಾಷ್ಟ್ರೀಕೃತ ಅಥವಾ ಖಾಸಗಿ ಬ್ಯಾಂಕ್‌ಗಳ ಲೋಗೋಗಳನ್ನು ಬಳಸಿಕೊಂಡು ನಕಲಿ ಅಪ್ಲಿಕೇಶನ್‌ಗಳನ್ನು ರಚಿಸುತ್ತಾರೆ, ಅದರ ಭದ್ರತೆಯನ್ನು ಅವರು ಉಲ್ಲಂಘಿಸಬಹುದು ಎಂದು ಅಧಿಕಾರಿಯೊಬ್ಬರು ವಿವರಿಸಿದರು. ವಂಚಕರು ವಾಟ್ಸಾಪ್ ಅಥವಾ ಟೆಕ್ಸ್ಟ್ ಸಂದೇಶಗಳ ಮೂಲಕ ಈ ಅಪ್ಲಿಕೇಶನ್ ಲಿಂಕ್‌ಗಳನ್ನು ಕಳುಹಿಸುತ್ತಾರೆ ಮತ್ತು ಒಮ್ಮೆ ಅಪ್ಲಿಕೇಶನ್ ನ್ನು ಫೋನ್‌ನಲ್ಲಿ ಸ್ಥಾಪಿಸಿದರೆ, ವಂಚಕರು ಸುಲಭವಾಗಿ ಹಣವನ್ನು ಕದಿಯಬಹುದು.ಇದು ಫಿಶಿಂಗ್‌ನ ಹೆಚ್ಚು ಸುಧಾರಿತ ರೂಪವಾಗಿದೆ, ವಂಚಕರು ಸಾಂಪ್ರದಾಯಿಕ ಭದ್ರತಾ ಕ್ರಮಗಳನ್ನು ಬೈಪಾಸ್ ಮಾಡಲು ಮತ್ತು ಸೂಕ್ಷ್ಮ ಮಾಹಿತಿಗೆ ಅನಧಿಕೃತ ಪ್ರವೇಶವನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಮೊದಲು, ಈ ವಿಧಾನಗಳನ್ನು ದೊಡ್ಡ ಕಂಪನಿಗಳಿಂದ ದೊಡ್ಡ ಪ್ರಮಾಣದಲ್ಲಿ ಹಣವನ್ನು ಕದಿಯಲು ಬಳಸಲಾಗುತ್ತಿತ್ತು ಎಂದು ಅವರು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.ಇದೇ ವಂಚಕರ ಬಲೆಗೆ ಬಿದ್ದು, 35 ವರ್ಷದ ಐಟಿ ಉದ್ಯೋಗಿ ಅನುಷಾ (ಹೆಸರು ಬದಲಾಯಿಸಲಾಗಿದೆ) 20 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆಕೆ ತನ್ನ ಬ್ಯಾಂಕ್‌ನಿಂದ ವಾಟ್ಸಾಪ್‌ನಲ್ಲಿ ಲಿಂಕ್ ನ್ನು ಸ್ವೀಕರಿಸಿದ್ದರು. ಬ್ಯಾಂಕ್‌ನಿಂದ ಅಪ್‌ಡೇಟ್‌ಗಳನ್ನು ಪಡೆಯಲು ಆ್ಯಪ್ ನ್ನು ಇನ್‌ಸ್ಟಾಲ್ ಮಾಡಿ ಎಂದು ಸಂದೇಶದಲ್ಲಿ ಸೂಚಿಸಲಾಗಿದ್ದು, "ಆಕೆ ಲಿಂಕ್ ನ್ನು ತೆರೆದ ತಕ್ಷಣ, ಫೋನ್ ವಂಚಕರ ನಿಯಂತ್ರಣಕ್ಕೆ ಬಂದಿತು. ರಾಜ್ಯದ ವಿವಿಧ ಭಾಗಗಳಿಂದ ಇದೇ ರೀತಿಯ ಪ್ರಕರಣಗಳು ವರದಿಯಾದ ನಂತರ ಮತ್ತು ಪೊಲೀಸರು ಬ್ಯಾಂಕ್ ಅಧಿಕಾರಿಗಳನ್ನು ಎಚ್ಚರಿಸಿದ ನಂತರ, ಬ್ಯಾಂಕ್ ತಡೆಗಟ್ಟುವ ಭದ್ರತಾ ಕ್ರಮಗಳನ್ನು ತೆಗೆದುಕೊಂಡಿತು ಮತ್ತು ಈಗ ಅಂತಹ ಪ್ರಕರಣಗಳು ಕಡಿಮೆಯಾಗಿವೆ ”ಎಂದು ಅಧಿಕಾರಿ ವಿವರಿಸಿದರು.ಇಂತಹ ವಂಚನೆಗಳಿಂದ ಪಾರಾಗಲು ಟೆಕ್ಸ್ಟ್ ಅಥವಾ ವಾಟ್ಸ್‌ಆ್ಯಪ್ ಸಂದೇಶಗಳಲ್ಲಿನ ಲಿಂಕ್‌ಗಳನ್ನು ಕ್ಲಿಕ್ ಮಾಡದಿರುವುದು ಒಂದೇ ಮಾರ್ಗ ಎಂದು ಸೈಬರ್ ತಜ್ಞ ಸುರೇಶ್ ಹೇಳಿದ್ದಾರೆ. ಬ್ಯಾಂಕ್‌ಗಳು ವಹಿವಾಟು ಎಚ್ಚರಿಕೆಗಳನ್ನು ಟೆಕ್ಸ್ಟ್ ಸಂದೇಶದ ಇನ್‌ಬಾಕ್ಸ್‌ಗೆ ಮಾತ್ರ ಕಳುಹಿಸುತ್ತವೆ ಮತ್ತು ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವುದನ್ನು ತಡೆಯಲು ಮೊಬೈಲ್ ಡೇಟಾವನ್ನು ಆಫ್ ಮಾಡಲು ಸಲಹೆ ನೀಡುತ್ತವೆ ಎಂದು ಹೇಳಿದ್ದಾರೆ.ಮೇ 21 ರಂದು ಹಾಸನ ಉಪವಿಭಾಗದ ಡಿವೈಎಸ್ಪಿ, ಸಂದೇಶದ ಮೂಲಕ ರವಾನಿಸಿದ ರಾಷ್ಟ್ರೀಕೃತ ಬ್ಯಾಂಕ್‌ನ ಅಥವಾ ಫೈಲ್ ಅನ್ನು ಹೊಂದಿದ ಲಿಂಕ್ ಮೂಲಕ ಅಪ್ಲಿಕೇಷನ್ ನ್ನು ಇನ್ಸ್ಟಾಲ್ ಮಾಡಿ 15.98 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದರು. ಹಣ ಕಳುವಾದ ಕೂಡಲೇ ಹಲವು ಮ್ಯೂಲ್ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದು ಹಾಸನದ ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿಗಳು ಒಂದೇ ಐಎಂಇಐ ನಂಬರ್ ಇರುವ 900 ಸಿಮ್ ಬಳಸಿರುವುದು ಪತ್ತೆಯಾಗಿದೆ.